Slide
Slide
Slide
previous arrow
next arrow

ದೇಶದ ಮೂಲೆ ಮೂಲೆಯಿಂದ ದೆಹಲಿಗೆ ಆಗಮಿಸಿವೆ ಅಮೃತ ಕಲಶ

300x250 AD

ನವದೆಹಲಿ: ಮೇರಿ ಮಾಟಿ ಮೇರಿ ದೇಶ್‌ (ನನ್ನ ಮಣ್ಣು, ನನ್ನ ದೇಶ) ಅಭಿಯಾನದ ಭಾಗವಾಗಿ ರಾಜ್ಯದ ರಾಜಧಾನಿಗಳಿಂದ ಸುಮಾರು 20 ಸಾವಿರ ಸ್ವಯಂಸೇವಕರೊಂದಿಗೆ ಮಾಟಿ ಕಲಶವನ್ನು ಹೊತ್ತ ವಿಶೇಷ ರೈಲುಗಳನ್ನು ದೆಹಲಿಯ ವಿವಿಧ ರೈಲು ನಿಲ್ದಾಣಗಳಲ್ಲಿ ಸ್ವಾಗತಿಸಲಾಗಿದೆ.

ದೇಶದ ಮೂಲೆ ಮೂಲೆಯಿಂದ 7,5000   ಕಲಶದಲ್ಲಿ ಮಣ್ಣನ್ನು ಸಂಗ್ರಹಿಸಿ ಅಮೃತ ಕಲಶ ಯಾತ್ರೆ ನಡೆಸಲಾಗುತ್ತಿದೆ. ರಾಷ್ಟ್ರದ ಉದ್ದೇಶಕ್ಕಾಗಿ ನಿಸ್ವಾರ್ಥವಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ ಧೈರ್ಯಶಾಲಿ ಸ್ವಾತಂತ್ರ್ಯ ಹೋರಾಟಗಾರರು ಮತ್ತು ವೀರರಿಗೆ ಗೌರವ ಸಲ್ಲಿಸುವುದು ಮತ್ತು ದೆಹಲಿಯಲ್ಲಿ ‘ಅಮೃತ ವಾಟಿಕಾ’ ಸ್ಥಾಪಿಸುವುದು ಈ ಉಪಕ್ರಮದ ಪ್ರಾಥಮಿಕ ಉದ್ದೇಶವಾಗಿದೆ.ಉತ್ತರ ರೈಲ್ವೆಯ ದೆಹಲಿ ವಿಭಾಗ ಮತ್ತು ಸಂಸ್ಕೃತಿ ಸಚಿವಾಲಯವು ಸ್ವಯಂಸೇವಕರನ್ನು ಸ್ವಾಗತಿಸಲು ವಿಸ್ತಾರವಾದ ವ್ಯವಸ್ಥೆಗಳನ್ನು ಮಾಡಿದೆ. ನಿಲ್ದಾಣಗಳಲ್ಲಿ ಡಿಬೋರ್ಡಿಂಗ್ ಮಾಡುವ ಸ್ವಯಂಸೇವಕರಿಗೆ ಮಾರ್ಗದರ್ಶನ ನೀಡಲು ನಿಲ್ದಾಣಗಳಲ್ಲಿ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

300x250 AD

ದೇಶದ ಮೂಲೆ ಮೂಲೆಯಿಂದ ಅಮೃತ ಕಲಶದ ಮೂಲಕ ಬಂದ ಮಣ್ಣನ್ನು ಬಳಸಿ ದೆಹಲಿಯಲ್ಲಿ ಅಮೃತ ವಾಟಿಕವನ್ನು ನಿರ್ಮಾಣ ಮಾಡಲಾಗುತ್ತದೆ.

Share This
300x250 AD
300x250 AD
300x250 AD
Back to top